“ಹೌದಲ್ಲ! ಪುಸ್ತಕಕ್ಕೆ ಗೆದ್ದಲ ಹತ್ಯಾಽವು
ಕನ್ನಡ ಬರೆಯೋದು ಓದೋಽದು ಮಾಡೋದಿಲ್ಲ ನೀವು
ಇಂಗ್ಲಿಷ್ ಪುಸ್ತಕ ಪತ್ರಿಕೆ
ಮನಿ ತುಂಬ ಹರಿವಿದ್ದೀರಲ್ಲ!
ನೀವು ಇಂಗ್ಲೀಷಿನವರ
ಸಂಬಂಧಿಕರೇಽನು ಮತ್ತಽ?
ಆರೇ ನಿಮ್ಮ ಟಿ.ವಿ. ಹೊಳ್ಯಾಕತ್ತತ್ಯಲ್ಲ ಎಷ್ಟ.
ಬಿಳಿ ಮಂದಿನ್ನಷ್ಟಽ ನೋಡ್ತಿರೇಽನ
ನಮ್ಮ ದೇಸದಾವ್ರು,
ಕನ್ನಡ ಮಂದಿ ಬರೋದಿಲ್ಲೇನ್ರಿ?
‘ಹೂಂ’
ದೇವ್ರ ದಿಂಡ್ರಗೆ
ಗುಡಿ ಗುಂಡಾರಕ ಹೋಗುದಿಲ್ಲೇಽನು
ಇದೇನು ಪಾರ್ಕು ಗಾರ್ಡನ್ ಅಂತ ಅಡ್ಡಾಡ್ತಿರಲ್ಲ!
ಯಕ್ಕಾಽ, ಚಮಚೆಯಿಂದನ ಊಟ ಮಾಡಿದ್ರ
ಕೈ ಇರೋದು ಯಾತಕ್ಕ”
ಎಂದು ನೂರೆಂಟು ಅಣಕು ಪ್ರಶ್ನೆ ಕೇಳಿ
“ನಮ್ಮ ಕನ್ನಡಾನ ನಮಗ ಛಲೋ ಬಿಡ್ರಿ”
ಅಂದ ಹೋದ ನಮ್ಮ
ಹೊಲದ ಬಸನಿಂಗನ ಮಾತು ಕೇಳಿ
ಯಾವುದಾದರೂ ವಾಟಾಳ್ ಪಕ್ಷನೋ
ಕನ್ನಡ ಚಳುವಳಿ, ಸಂಘರ್ಷ ಪಕ್ಷನೋ
ಸೇರಿ
‘ಕನ್ನಡಾ ಕನ್ನಡಾ’ ಅಂತ
ಚೀರಾಡು ಹಂಗಾಽತ ನನ ಮನಸು
*****
Related Post
ಸಣ್ಣ ಕತೆ
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…